ಎರಡು ಹೊಸ ಭೂಗ್ರಹಗಳ ಶೋಧ

ಎರಡು ಹೊಸ ಭೂಗ್ರಹಗಳ ಶೋಧ

ಈಗಿರುವ ಗ್ರಹಗಳಲ್ಲಿ ಜೀವಸಂಕುಲದ ಅನ್ವೇಶಣೆ ಒಂದೆಡೆ ಸಾಗಿದರೆ ಇದರ ಜೊತೆಗೆ ಹೊಸ ಭೂಗ್ರಹಗಳ ಹುಡುಕಾಟವೂ ನಡೆಯುತ್ತಿದ್ದು ಎರಡು ಹೊಸ ಭೂಗ್ರಹಗಳನ್ನು ಸ್ವಿಡ್ಜರ್ ಲ್ಯಾಂಡಿನ ಜಿನಿವಾ ವೇದಶಾಲೆ, ಮತ್ತು ಅಮೇರಿಕನ್ ಖಗೋಳ ವೇದ ಶಾಲೆಗಳು ಕಂಡು ಹಿಡಿದಿವೆ.

ಈ ಎರಡು ಭೂಗ್ರಹಗಳು ನಮ್ಮಿಂದ ೩೫ ಜ್ಯೋತಿವರ್‍ಷಗಳ ಅಂತರದಲ್ಲಿವೆ, ಎಂದು ವಿಜ್ಞಾನಿಗಳು ಅಭಿಪ್ರಾಯ. ಇದರಂತೆ ೭೦ ವರ್ಜಿನಿಸ್, ಮತ್ತು “೪೭ ಉರ್ಸೆ ಮೆಜೋರಿಸ್” ಎಂದು ಹೆಸರಿಸಲಾಗಿದ್ದು ಒಂದು ಕನ್ಯಾರಾಶಿಯಲ್ಲಿಯೂ ಇನ್ನೊಂದು ಸಪ್ತರ್ಷಿ ಮಂಡಲದಲ್ಲಿಯೂ ಇವೆ, ಎಂದು ಖಚಿತಪಡಿಸಿಕೊಳ್ಳಲಾಗಿದೆ. ರೇಡಿಯೋ ತರಂಗಗಳ ಮೂಲಕ ನಾವು ಸಂದೇಶ ಕಳಿಸಿದರೆ ೩೫ ವರ್ಷಗಳು ಬೇಕು. ನಕ್ಷತ್ರವಾಗಿದ್ದು ಸೂರ್ಯನಂತೆ ಇವೆ. ಇದನ್ನು ಸುತ್ತುವ ವರ್ಜಿನಿಯಸ್ – ೭೦, ನಮ್ಮ ಗುರುಗ್ರಹದ ಗಾತ್ರಕ್ಕಿಂತ ೮ ಪಟ್ಟು ದೊಡ್ಡದಿದೆ. ಪ್ರತಿ ೧,೧೦೦ ದಿನಗಳಿಗೊಮ್ಮೆ ತನ್ನ ಸೂರ್ಯನನ್ನು ಪ್ರದಕ್ಷಣೆ ಇವು ಹಾಕುತ್ತಿವೆ. ಇದರ ತಾಪಮಾನ ೮೦ ಸೆಲ್ಸಿಯಸ್‌ನಷ್ಟು ಇದೆ.

ಇವೆರೆಡೂ ಗ್ರಹಗಳಲ್ಲಿ ನೀರು ಇದ್ದು ಮತ್ತು ಜೀವಿ ವಿಕಾಸ ಉಂಟಾಗಿರುವ ಸಾಧ್ಯತೆ ಇದೆ, ಎಂಬುವುದು ವಿಜ್ಞಾನಿಗಳ ಅಭಿಪ್ರಾಯ. ಜೀವಿಗಳು ಅಥವಾ ಮಾನವ ವಾಸಯೋಗ್ಯ ವಾತಾವರಣ ಬಗ್ಗೆ ಯೋಚಿಸುತ್ತಿರುವ ಖಗೋಳಜ್ಞರಿಗೆ ಆಶಾದಾಯಕ ಅಂಶವೆಂದರೆ ಈ ಗ್ರಹಗಳಿಗಿರುವ ಚಂದ್ರರು. ಈ ಚಂದ್ರರ ಮೇಲೆ ವಾಸಯೋಗ್ಯವಾದ ಭೂಮಿ ಇದೆ ಎಂಬ ಆಶಾಭಾವನೆಯನ್ನು ಹೊಂದಿದ್ದಾರೆ. ಈ ಗ್ರಹಗಳ ಚಂದ್ರದಲ್ಲಿ ಸಾಗರ ಮತ್ತು ಮಳೆಯ ವಾತಾವರಣವಿದ್ದುದರಿಂದ ಮಾನವರಿಗೆ ವಸತಿಯೋಗ್ಯವೆಂದು ನಿರೀಕ್ಷಿಸಿದ್ದಾರೆ. ಈಗಾಗಲೇ ಇಂಥಹ ನಕ್ಷತ್ರಗಳನ್ನು ಮತ್ತು ಅಲ್ಲಿನ ಗ್ರಹಗಳ ಬೇಟಿಯಲ್ಲಿ ನಿರತವಾಗಿರುವ ಖಗೋಳ ಶಾಸ್ರಜ್ಞರಿಗೆ ಇದು ಹೊಸತಲ್ಲವಾದರೂ ಏನನ್ನೊ ನಿರೀಕ್ಷಿಸಿದಾರೆ. ಇನೂ ೬೦ ಗ್ರಹಗಳನ್ನು ಈ ತಂಡವು ವೀಕ್ಷಿಸತೊಡಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲರಂತಾನುಂ ಪ್ರಜಾರಾಜನಿರಲೇನು ತಪ್ಪು ? ಗೊಣಗಿದರೆ ?
Next post ಎಷ್ಟು ಜನ್ಮದ ಪುಣ್ಯದ ಫಲವೋ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys